ಅಮ್ಮ ಪ್ರಶಸ್ತಿ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು , ೨೦೦೦ ರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡುತ್ತಿರುವವರಿಗೆ ಕೊಡಲಾಗುತ್ತಿದೆ. ಪತ್ರಕರ್ತ, ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿಗಾಗಿ ಸ್ಥಾಪಿಸಿದ ಪ್ರಶಸ್ತಿ ಇದಾಗಿದೆ. ಕನ್ನಡದ ಪ್ರತಿಭಾವಂತ ಬರಹಗಾರರು ಅಮ್ಮಪ್ರಶಸ್ತಿಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ;ಗೌರವಿಸಿದ್ದಾರೆ. == ಪ್ರಶಸ್ತಿಯ ವಿವರ == ಪ್ರಶಸ್ತಿಯು ತಲಾ 5000 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಒಳಗೊಂಡಿರುತ್ತದೆ. == ೨೦೧೦ರ ಪ್ರಶಸ್ತಿ ವಿಜೇತರು ಮತ್ತು ಕೃತಿಗಳು == ಡಿ.ಬಿ.ರಜಿಯಾ ಅವರ ಕವಿತೆಗಳು ಡಾ.ಲಕ್ಷ್ಮಣಕೌಂಟೆ ಅವರ ಐತಿಹಾಸಿಕ ಕಾದಂಬರಿ ಆಂದೋಲನ ಬಿ.ಎನ್.ಮಲ್ಲೇಶರ ಬ್ರೇಕಿಂಗ್ ನ್ಯೂಸ್ ಎ.ಆರ್.ಮಣಿಕಾಂತರ ಅಮ್ಮ ಹೇಳಿದ ಎಂಟು ಸುಳ್ಳುಗಳು ನವೆಂಬರ್ 26, ೨೦೧೦ ರಂದು ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗಿದ ಸಮಾರಂಭದಲ್ಲಿ ಅಮ್ಮಪ್ರಶಸ್ತಿ ಪ್ರದಾನ ಮಾಡಲಾಯಿತು. ದಶಮಾನೋತ್ಸವದ ಅಂಗವಾಗಿ == ೨೦೧೨ರ ಪ್ರಶಸ್ತಿ ವಿಜೇತರು ಮತ್ತು ಕೃತಿಗಳು == ಹಿರಿಯ ಲೇಖಕ, ಪತ್ರಕರ್ತ ಜಿ ಎನ್ ಮೋಹನ್ ಅವರ ಅನುವಾದ ಬರ ಅಂದ್ರೆ ಎಲ್ಲರಿಗೂ ಇಷ್ಟ ಕಥೆಗಾರ್ತಿ ಸುಧಾ ಚಿದಾನಂದಗೌಡ ಅವರ ಕಥಾ ಸಂಕಲನ ಕನ್ನಡಿಯನ್ನು ನೋಡಲಾರೆ ಕವಿಯಿತ್ರಿ ಜ.ನಾ.ತೇಜಶ್ರೀ ಅವರ ಕಾವ್ಯ ಅವನರಿವಲ್ಲಿ ಸಂಶೋಧಕ ಡಾ.ವಿ.ಜಿ.ಪೂಜಾರ್ ಅವರ ಸಂಶೋಧನಾ ಕೃತಿ ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಯ ತತ್ವಪದಕಾರರ ಸ್ಮಾರಕಗಳು ಕಾದಂಬರಿಕಾರ ಎಂ.ಆರ್.ದತ್ತಾತ್ರಿ ಅವರ ಕಾದಂಬರಿ ದ್ವೀಪವ ಬಯಸಿ == ಬಾಹ್ಯ ಕೊಂಡಿಗಳು == ೨೦೧೦ರ ಪ್ರಶಸ್ತಿಯ ವಿವರಗಳು ದಟ್ಸ್ ಕನ್ನಡದಲ್ಲಿ - ://..//2010/11/13/-------. ://../%E0%B2%90%E0%B2%B5%E0%B2%B0-%E0%B2%95-%E0%B2%A4-%E0%B2%97%E0%B2%B3-%E0%B2%97-%E0%B2%85%E0%B2%-%E0%B2%-%E0%B2%-114243331. ://..//210680L15-%E0%B2%90%E0%B2%B5%E0%B2%B0-%E0%B2%95-%E0%B2%A4-%E0%B2%97%E0%B2%B3-%E0%B2%97-%E0%B2%85%E0%B2%-%E0%B2%-%E0%B2%-%E0%B2%B0%E0%B2%B6%E0%B2%B8-%E0%B2%A4.